ರಾಜ್ಯ ಜಾತಿ ಗಣತಿ ಸಮೀಕ್ಷೆ: ಸಮೀಕ್ಷಾ ಸಿಬ್ಬಂದಿಗೆ ₹20,000 ಗೌರವಧನ, ಗಡುವು ವಿಸ್ತರಣೆ
ರಾಜ್ಯದಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ ಜಾತಿ ಗಣತಿ (ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ) ಕಾರ್ಯಕ್ಕೆ ಸರ್ಕಾರವು ಪ್ರಮುಖ ಘೋಷಣೆಗಳನ್ನು ಮಾಡಿದೆ. ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ₹20,000 ಗೌರವಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿರುವ 1.60 ಲಕ್ಷ ಸಿಬ್ಬಂದಿ (ಇವರಲ್ಲಿ 1.20 ಲಕ್ಷ ಶಿಕ್ಷಕರು) ಗೆ ತಲಾ ₹20,000 ಗೌರವಧನ ಸಿಗಲಿದೆ. ಸಮೀಕ್ಷೆ ನಡೆಯುತ್ತಿರುವಾಗ ದುರದೃಷ್ಟವಶಾತ್ ಮೂವರು ಶಿಕ್ಷಕರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ .
ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿದ್ದು, 6,700 ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿದ್ದಾರೆ.ಇಲ್ಲಿ ನರಕ ಚತುರ್ದಶಿ ಒಳಗೆ (ಸುಮಾರು ಅಕ್ಟೋಬರ್ ಅಂತ್ಯ) ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ.ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಒಪ್ಪದ, ಹಿಂದೇಟು ಹಾಕುವ ಸಿಬ್ಬಂದಿಯ ವಿರುದ್ಧ ಸರ್ಕಾರವು ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಖಡಾಖಂಡಿತವಾಗಿ ಎಚ್ಚರಿಕೆ ನೀಡಿದ್ದಾರೆ.
ನಮ್ಮ WhatsApp ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

No comments:
Post a Comment